ನೆಲ್ಸನ್ ಮಂಡೇಲ

ನರಬಕ್ಷಕ ರಾಕ್ಷಸರು
ಬಿಳಿ ಮುಖದ ಗುಳ್ಳೆನರಿಗಳು
ಸಿಡಿಲಮರಿಗೆ ಆಹ್ವಾನಿಸಿದವು.
ಸೆರೆಮನೆಯ ಗೋಡೆಗಳು
ಸಿಡಿವಂತೆ ಮಾಡಿದರು.

ಬಂದಿಖಾನೆಯ ಬಂಧನದ
ಕತ್ತೆಲೆಯಲಿ ನೀ ಕಳೆದ
ಇಪ್ಪತ್ತಾರು ವರ್ಷಗಳು.
ಸೆರೆಮನೆಯ ಪ್ರತಿಯೊಂದು
ಕಲ್ಲುಗಳಿಗೂ ನಿನ್ನ
ನಿಟ್ಟುಸಿರಿನ ಬಿಸಿಯು ತಟ್ಟಿ
ಕೆಂಪಾಗಿವೆ ಮಂಡೇಲಾ.

ಮಾತಿಗೂ ಮೀರಿದ ನಿನ್ನ
ಸ್ನೇಹದ ಮುಗುಳು ನಗೆ
ಕೈಬೀಸಿ ಜನಸಾಗರವ
ಹತ್ತಿರಕ್ಕೆಳೆದುಕೊಂಡು
ಹೂವಿನಂತೆ ಕೈಯಾಡಿಸಿ
ಮೈದಡವಿ ಮಾನವೀಯತೆಯನು
ಬಿಗಿದಪ್ಪಿದೆ ಮಂಡೇಲಾ.

ನಿನ್ನವರ ನೋವುಗಳು
ಗಟ್ಟಿಯಾಗಿ ಹೆಪ್ಪುಗಟ್ಟಿ
ಬಾಯಿ ಬಂದಿದೆ ನೋಡು
ನೋವಿನಾಚೆಯ ಮಾತುಗಳು
ಬರಲಿರುವ ಕೆಂಪು
ಸೂರ್ಯನಿಗಾಗಿ ಕಾದಿವೆ ನೋಡು.

ಜನಸಾಗರದ ನಡುವೆ
ಭೋರ್ಗರೆದು
ಧುಮ್ಮಿಕ್ಕಿ ಹರಿವ ನಿನ್ನ
ಅಡ್ಡ ಬಂದವರು
ಚಿಂದಿಯಾದರೂ ಮಂಡೇಲಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಸ್ತು ಪಹರೆಯೊಳಿನ್ನೆಷ್ಟು ದಿನ ಜೀವನವೋ?
Next post ಯಾಕೆ?

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys